ಉಳಾಯಿಬೆಟ್ಟುವಿನಲ್ಲಿ  ಈಜಲು ಹೋದ ಯುವಕನ ಜೀವಾಂತ್ಯ

ಉಳಾಯಿಬೆಟ್ಟುವಿನಲ್ಲಿ ಈಜಲು ಹೋದ ಯುವಕನ ಜೀವಾಂತ್ಯ

ಉಳಾಯಿಬೆಟ್ಟುವಿನಲ್ಲಿ ಈಜಲು ಹೋದ ಯುವಕನ ಜೀವಾಂತ್ಯ 


ನೀರು ನಿಂತ ಕಲ್ಲಿನ ಕ್ವಾರೆಯಲ್ಲಿ ಈಜಲು ಹೋದ ಯುವಕ ಮೃತಪಟ್ಟ ಘಟನೆ ಇಂದು  ಮಂಗಳೂರಿನ ಉಳಾಯಿಬೆಟ್ಟು ಎಂಬಲ್ಲಿ ನಡೆದಿದೆ.

ಇಂದು ಸಂಜೆ 5-30 ಘಂಟೆಯ ಸಮಯ  ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ವಿನ ಕಾಯರಪದವು ಎಂಬಲ್ಲಿ ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿ ನಂತರ ಅಲ್ಲಿಯೇ ಆಟದ ಮೈದಾನದ ಪಕ್ಕದ್ದಲ್ಲಿ ಕಲ್ಲಿನ ಕ್ವಾರೆ ಯಲ್ಲಿ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿದ್ದ  *ವೇಳೆ ಈ ಘಟನೆ ನಡೆದಿದೆ.


 ಜೋಕಟ್ಟೆ ನಿವಾಸಿ ಶಿಯಾಬ್ ಎಂಬ 21 ವರ್ಷ ಪ್ರಾಯದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.  ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article